ಸಂಗೀತ, ಗಾಯನದೊಡನೆ ಭಾವಗೀತೆಗಳನ್ನು ಒದಗಿಸುವ ಅನೇಕ ಅಂತರ್ಜಾಲದ ತಾಣಗಳಿದ್ದರೂ ಸಹ ಕೇವಲ ಭಾವಗೀತೆಗಳ ಸಾಹಿತ್ಯಕ್ಕೆ ಮೀಸಲಾದ ತಾಣವಿರುವುದೇ? ತಿಳಿಯದು. ಆದರೆ ಎಷ್ಟೋ ಬಾರಿ ಇಲ್ಲಿ ಅಲೆಯುತ್ತ ಕವಿತೆಗಳ ಸಾಹಿತ್ಯಕ್ಕಾಗಿ ಅರಸಿದಾಗ ತೃಪ್ತಿಯಾಗುವಂತಹ ಫಲಿತಾಂಶ ನನಗಂತೂ ದಕ್ಕಿಲ್ಲ. ಆದ್ದರಿಂದಲೇ ಈ ಪುಟ್ಟ ಪ್ರಯತ್ನ. ಭಾವಗೀತೆಗಳ ಯಾವುದಾದರು ಸಾಲುಗಳು ಇಲ್ಲಿ ತಪ್ಪಾಗಿ ಬರೆಯಲ್ಪಟ್ಟಿದ್ದರೆ ತಿಳಿಸಿ, ಎಷ್ಟೋ ಗೀತೆಗಳು ರಚನಕಾರರ ಹೆಸರಿಲ್ಲದೆ ಹಾಗೆ ಬರೆಯಲ್ಪಟ್ಟಿವೆ, ತಿಳಿದಿದ್ದವರು ಅದನ್ನು ತಿದ್ದಬಹುದು. ಈ ಸಣ್ಣ ಪ್ರಯತ್ನದ ಬಗ್ಗೆ ನಿಮ್ಮ ಒಂದು ಚಿಕ್ಕ ಅಭಿಪ್ರಾಯವನ್ನು ತೇಲಿಬಿಟ್ಟರೆ ಮುದವೆನಿಸುವುದು.




Friday 15 March 2013

ಹೂಬಳ್ಳಿಯ ಹಿಗ್ಗೆ / Hooballiya Higge

ಹೂಬಳ್ಳಿಯ ಹಿಗ್ಗೆ ಆನಂದದ ಬುಗ್ಗೆ
ಅರೆ ಅರಳಿದ ಮೊಗ್ಗೆ ಮಲಗು ಮಲಗು..
ಹೂವಾಡತಿ ಬರುತಾಳೆ ಬಂದರೆತ್ತಿ ಒಯ್ಯುತಾಳೆ
ಮಲಗು ಮಲಗು.
                                                                ಹೂಬಳ್ಳಿಯ ಹಿಗ್ಗೆ...

ಮಮಕಾರದ ಮುತ್ತೆ, ಬೆಳದಿಂಗಳ ನತ್ತೆ
ಸ್ವಾತಿಯ ಮಣಿ ಮುತ್ತೇ ಮಲಗು ಮಲಗು.
ಮುತ್ತುಗಾರ ಬರುತಾನೆ ಬಂದರೆತ್ತಿ ಒಯ್ಯುತಾನೆ.
ಮಲಗು ಮಲಗು.
                                                                ಹೂಬಳ್ಳಿಯ ಹಿಗ್ಗೆ...

ಥಳಥಳಿಸುತ ಕಣ್ಣ ಅಳುವುದು ಏಕಣ್ಣ
ನನ್ನೊಲವಿನ ಚಿನ್ನ ಮಲಗು ಮಲಗು
ಚಿನ್ನಗಾರ ಬರುತಾನೆ ಬಂದರೆತ್ತಿ ಒಯ್ಯುತಾನೆ
ಮಲಗು ಮಲಗು.
                                                                ಹೂಬಳ್ಳಿಯ ಹಿಗ್ಗೆ...

ನನ್ನ ಇರುಳ ಕನಸೇ, ನಾಳೆಯ ಹೂ ಮನಸೇ
ನನ್ನ ಮೇಲೆ ಮುನಿಸೇ? ಮಲಗು ಮಲಗು
ಗಾಳಿಗುಮ್ಮ ಬರುತಾನೆ ಬಂದರೆತ್ತಿ ಒಯ್ಯುತಾನೆ.
ಮಲಗು ಮಲಗು.
                                                                ಹೂಬಳ್ಳಿಯ ಹಿಗ್ಗೆ...

ನನ್ನ ಕೊರಳ ಸರವೇ, ಹಠವು ನಿನಗೆ ಥರವೇ?
ಬಣ್ಣಗನಸ ಕರೆವೆ, ಮಲಗು ಮಲಗು
ಕನಸುಗಾತಿ ಬರುತಾಳೆ ರಾಶಿ ಹೂವ ತರುತಾಳೆ.
ಮಲಗು ಮಲಗು.
                                                               ಹೂಬಳ್ಳಿಯ ಹಿಗ್ಗೆ...


* ಅಶ್ವಥರ ತೂಗುಮಂಚ ಸಂಕಲನದ  ಗೀತೆ. ಸಾಹಿತ್ಯ ಹೆಚ್ಚೆಸ್ವಿ ಅವರದ್ದೆಂದು ಕೇಳಿ ಗೊತ್ತಷ್ಟೆ. ಖಾತ್ರಿಯಿಲ್ಲ. - ವಸು.

Download this song


Saturday 2 March 2013

ಬಾ ಫಾಲ್ಗುಣ ರವಿ ದರ್ಶನಕೆ / Baa Phalguna Ravi Darshanake

ಶಿವಮಂದಿರ ಸಮ ವನಸುಂದರ ಸುಮ ಶೃಂಗಾರದ ಗಿರಿಶೃಂಗಕೆ ಬಾ!
ಬಾ ಫಾಲ್ಗುಣ ರವಿ ದರ್ಶನಕೆ!

ಕುಂಕುಮ ಧೂಳಿಯ ದಿಕ್ತಟವೇದಿಯೊಳೋಕುಳಿಯಲಿ ಮಿಂದೇಳುವನು
ಕೋಟಿವಿಹಂಗಮ ಮಂಗಲರವರಸನೈವೇದ್ಯಕೆ ಮುದ ತಾಳುವನು
ಚಿನ್ನದ ಚೆಂಡನೆ ಮೂಡುವನು; ಹೊನ್ನನೆ ಹೊಯ್‌ನೀರ್ ನೀಡುವನು
ಸೃಷ್ಟಿಯ ಹೃದಯಕೆ ಪ್ರಾಣಾಗ್ನಿಯ ಹೊಳೆಹರಿಯಿಸಿ ರವಿ ದಯಮಾಡುವನು || ಬಾ ||

ತೆರೆತೆರೆಯಾಗಿಹ ನೊರೆನೊರೆ ಕಡಲೆನೆ ನೋಡುವ ಕಣ್ಣೋಡುವವರೆಗೆ
ಬನಸಿರಿ ತುಂಬಿದ ಕಣಿವೆಯ ಹಂಬಿರೆ ಧೂಳೀಸಮಹಿಮ ಬಾನ್‌ಕರೆಗೆ
ಪ್ರತಿಭೆಯ ಹೋಮಾಗ್ನಿಯ ಮೇಲೆ ಕವಿಮನ ತಾನುರಿದುರಿದೇಳೆ
ಮರಗಿಡದಲಿ ಜಡದೊಡಲಲಿ ಇದೇಕೋ ಸ್ಪಂದಿಸುತಿದೆ ಭಾವಜ್ವಾಲೆ || ಬಾ ||

ವರ್ಣನದಿಂದ್ರಿಯ ನಂದನವನು ದಾಂಟುತೆ ದರ್ಶನ ಮುಕ್ತಿಯ ಸೇರಿ
ವ್ಯಕ್ತಿತೆ ಮೈಮರೆವುದು ಸೌಂದರ್ಯ ಸಮಾಧಿಯೊಳಾನಂದವ ಹೀರಿ
ಸರ್ವೇಂದ್ರಿಯ ಸುಖನಿಧಿ ಅಲ್ಲಿ; ಸರ್ವಾತ್ಮನ ಸನ್ನಿಧಿ ಅಲ್ಲಿ
ಸಕಲಾರಾಧನ ಸಾಧನ ಬೋಧನ ಅನುಭವರಸ ತಾನಹುದಲ್ಲಿ || ಬಾ ||


                                                                                            - ಕುವೆಂಪು 

Download This Song